Friday, October 25, 2013

ಪೆದ್ದರಾಯನ ಪದ್ಯ

ಕೊಡುವಾಗ ಸ್ವಾರ್ಥವಿಲ್ಲದೇ ಕೊಟ್ಟರೂ
ಪಡೆದವನ ಬೆಳವಣಿಗೆಯಾದ ಮೇಲೆ
ಕೊಟ್ಟವನು ಅದು ತನ್ನ ಕೊಡುಗೆಯೆಂಬ
ವಾಸ್ತವವನ್ನು ಸಾಬೀತು ಪಡಿಸಿ
ಸಂತೋಷ ಪಡುವ ಬಯಕೆಯಲ್ಲಿದ್ದರೆ

ಪಡೆದವನು ಇದು ನನ್ನ ಭಾಗ್ಯದ
ಕೊಡುಗೆಯೆಂದೆಣಿಸಿ ತನ್ನ ಏಳಿಗೆಯ
ಕಾರಣ ತನ್ನನ್ನೇ ಮತ್ತು ತನ್ನ ಭಾಗ್ಯವನ್ನೇ
ಆಗಿಸಿಕೊಂಡು ಮತ್ತಷ್ಟು ಪಡೆಯುವ
ತವಕದಲ್ಲಿ ಕಳೆದಿರುತ್ತಾನೆ

ಇಬ್ಬರಿಗೂ ಇರುವ ಭ್ರಮೆಗಳು
ಇಬ್ಬರನ್ನೂ ದುಃಖಿ-ಸುಖಿಗಳಾಗಿ
ವಿಂಗಡಿಸಿ ಹಾಕುವ ಈ ಆಟ
ಬಲು ಸೊಗಸು ಲೋಕದಲಿ - ಪೆದ್ದರಾಯ

No comments:

Post a Comment