Wednesday, November 13, 2013

ಗಾಯತ್ರೀ


ಪ್ರಣವ ಮತ್ತು ಭೂಃ, ಭುವಃ, ಸ್ವಃ ಎಂಬ ಮೂರು ವ್ಯಾಹೃತಿಗಳ ಸಹಿತವಾದ ತತ್ಸವಿತುರ್ವರೇಣ್ಯಂ... ಎಂಬ ಮಂತ್ರದ ಉಪಾಸನೆ ಗಾಯತ್ರೀ ಉಪಾಸನೆ ಎಂದು ಪ್ರಖ್ಯಾತವಾಗಿದೆ.  ತಲಾ ಎಂಟು ಅಕ್ಷರಗಳ ಮೂರು ಪಾದಗಳು ಹಾಗೂ ಒಟ್ಟು ಇಪ್ಪತ್ನಾಲ್ಕು ಅಕ್ಷರಗಳು ಈ ಋಕ್ಕಿನಲ್ಲಿ ಇವೆ. ಈ ರೀತಿ ಮೂರು ಪಾದ ಮತ್ತು ಇಪ್ಪತ್ನಾಲ್ಕು ಅಕ್ಷರಗಳನ್ನು ಹೊಂದಿದ ಗಾಯತ್ರೀ ಛಂದಸ್ಸಿನ ಮಂತ್ರಗಳು ಋಗ್ವೇದ ಸಂಹಿತೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಇವೆ. ಈ ಋಕ್ಕು (ಋಗ್ವೇದ 3-62-10, ಯಜುರ್ವೇದ 1-5-64, ಶುಕ್ಲ 3-43, ಸಾಮ-2-13-9) ನಾಲ್ಕೂ ವೇದಗಳ ಸಂಹಿತೆಯಲ್ಲಿ ಏಕರೂಪವಾಗಿ ಇದೆ. ‘ಗಾಯಂತಂ ತ್ರಾಯತೆ’ ಎಂದರೆ ಗಾನ ಮಾಡುವವರನ್ನು ಅಥವಾ ಜಾಪಕನನ್ನು ರಕ್ಷಿಸುತ್ತದೆ ಎನ್ನುವ ಕಾರಣಕ್ಕೆ ಹಾಗೂ ತನ್ನ ಛಂದಸ್ಸಿನ ಕಾರಣಕ್ಕಾಗಿ ಈ ಮಂತ್ರವು “ಗಾಯತ್ರಿ’’ ಎಂದು ಲೋಕದಲ್ಲಿ ಪರಿಚಿತವಾಗಿದೆಯಾದರೂ ಈ ಋಕ್ಕಿನಲ್ಲಿ ಗಾಯತ್ರಿ ಎಂಬ ದೇವಿಯ ಉಲ್ಲೇಖ ಇಲ್ಲ. ಬದಲಾಗಿ ಸವಿತೃವಿನ ಪ್ರಾರ್ಥನೆ ಇದೆ. 'ಸುವತಿ-ಪ್ರೇರಯತಿ ಕರ್ಮಾಣಿ ಲೋಕಂ' ಎನ್ನುವಂತೆ ಜಗತ್ತಿನ ಜೀವಿಗಳನ್ನು  ತನ್ನ ಜ್ಯೋತಿಯ ಮೂಲಕ ಅವುಗಳಲ್ಲಿ ಚೈತನ್ಯ ತುಂಬಿ ಕಾರ್ಯಪ್ರವೃತ್ತವಾಗಿಸುವ ಕಾರಣಕ್ಕಾಗಿ ಸೂರ್ಯನಿಗೆ ‘ಸವಿತಾ’ ಎಂಬ ಹೆಸರಿದೆ. ಆ ಸವಿತೃವಿನ ಪ್ರಾರ್ಥನೆಯ ಋಕ್ಕು ಇದಾದ್ದರಿಂದ ಗಾಯತ್ರೀ ಮಂತ್ರಕ್ಕೆ ವೈದಿಕ ಸಾಹಿತ್ಯದಲ್ಲಿ ‘ಸಾವಿತ್ರೀ’ ಎಂಬ ಹೆಸರಿದೆ.
ಹೃದಯಾಕಾಶೆ ತು ಯೋ ಜೀವಃ ಸಾಧಕೈರುಪಗೀಯತೆ!
ಸ ಏವಾದಿತ್ಯರೂಪೇಣ ಬಹಿರ್ನಭಸಿ ರಾಜತೆ !! 
ಹೃದಯಾಕಾಶದಲ್ಲಿ ಸಾಧಕರಿಂದ ಸ್ತುತಿಸಲ್ಪಡುವ ಯಾವ ಆತ್ಮನಿದ್ದಾನೋ ಆ ಆತ್ಮವೇ ್ಲ ಬಾಹ್ಯಾಕಾಶದಲ್ಲಿ ಸೂರ್ಯನ ರೂಪದಲ್ಲಿ ಪ್ರಕಾಶಿಸುತ್ತಾನೆ ಎಂದು ಋಷಿಗಳು ತಿಳಿಸಿದ್ದಾರೆ.
ಸ ಯಶ್ಚಾಯಂ ಪುರುಷೆ,  ಯಶ್ಚಾಸಾವಾದಿತ್ಯೆ, ಸ ಏಕಃ - ಎಂಬ ತೈತ್ತರೀಯೋಪನಿಷತ್ತಿನ ಈ ಮಾತು ಕೂಡ ಅದನ್ನೇ ಹೇಳುತ್ತದೆ. ನಿರ್ಗುಣೋಪಾಸನೆಯ ಕಾಲವಾದ ವೇದಕಾಲದ ಸಂಧ್ಯಾವಂದನೆಯ ಕೇಂದ್ರಬಿಂದುವಾದ ಈ ಮಂತ್ರವೂ ಕೂಡ ನಿರ್ಗುಣ ಪರಬ್ರಹ್ಮವನ್ನೇ ಸ್ತುತಿಸುತ್ತದೆ. ಆದರೆ ಕಾಲಾಂತರದಲ್ಲಿ ಸಗುಣೋಪಾಸನೆ ಅನಿವಾರ್ಯವಾದ ಕಾಲಘಟ್ಟದಲ್ಲಿ ಪೌರಾಣಿಕ ಋಷಿಗಳು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆ ಗಾಯತ್ರೀ ಮಂತ್ರದ ಅಧಿದೇವತೆಯನ್ನು ಕೂಡ ಒಂದು ದೇವಿಯ ರೂಪದಲ್ಲಿ ವರ್ಣಿಸಿ ಸ್ತುತಿಸಿದರು. 
ಮುಕ್ತಾವಿದೃಮ ಹೇಮ ನೀಲ ಧವಳಚ್ಛಾಯೈರ್ಮುಖೈಸ್ತ್ರೀಕ್ಷಣೈಃ
ಯುಕ್ತಾಮಿಂದುಕಲಾ ನಿಬದ್ಧ ರತ್ನಮುಕುಟಾಂ ತತ್ವಾರ್ಥ ವರ್ಣಾತ್ಮಿಕಾಂ
ಗಾಯತ್ರೀಂ ವರದಾಭಯಾಂಕುಶ ಕಶಾಃ ಶುಭ್ರಂ ಕಪಾಲಂ ಗದಾಂ
ಶಂಖಂ ಚಕ್ರಮಥಾರವಿಂದಯುಗಳಂ ಹಸ್ತೈರ್ವಹಂತೀಂ ಭಜೆ
ಮೂರು ಸಂಧ್ಯಾಕಾಲಗಳಲ್ಲಿ ಗಾಯತ್ರೀದೇವಿಯ ಮೂರು ವಿವಿಧ ರೂಪಗಳ ವರ್ಣನೆ ಇದೆಯಾದರೂ ಮೇಲಿನ ಧ್ಯಾನಶ್ಲೋಕದಲ್ಲಿ ವರ್ಣಿಸಿದಂತೆ ಸಮಷ್ಟಿಯಾಗಿ ಗಾಯತ್ರೀ ದೇವಿಯನ್ನು ಐದು ಮುಖಗಳುಳ್ಳವಳಾಗಿ ಧ್ಯಾನಿಸುವ ಪದ್ಧತಿ ಹೆಚ್ಚು ಪ್ರಚಲಿತ ಮತ್ತು ಎಲ್ಲರಿಗೂ ಪರಿಚಿತ. ಆ ಪಂಚಮುಖೀ ಗಾಯತ್ರೀದೇವಿಯ ಸ್ವರೂಪದ ಹಿಂದೆ ಗಹನವಾದ ತಾತ್ವಿಕ ಅರ್ಥವಿದೆ.
1.    ಗಾಯತ್ರೀ ದೇವಿಯ ಮೊದಲ ಮುಖ ‘ಮುಕ್ತಾ’ ಎಂದರೆ ಮೌಕ್ತಿಕದ ಅಥವಾ ಮುತ್ತಿನ ವರ್ಣದಿಂದ ಕೂಡಿದೆ. ಕೆಂಪು ಬಣ್ಣದಿಂದ ಪರಿವರ್ತಿತವಾಗಿ ಶ್ವೇತಕ್ಕೆ ತಿರುಗಿದಂತಿರುವ ಈ ಬಣ್ಣವು ರಜೋಗುಣದಿಂದ ಪರಿವರ್ತಿತವಾದ ಸತ್ವಗುಣವನ್ನು ಸೂಚಿಸುತ್ತದೆ. ಈ ಮುಖವು ವ್ಯಾಕರಣ ಶಾಸ್ತ್ರವನ್ನು ಪ್ರತಿನಿಧಿಸುತ್ತದೆ. ಗಣಪತಿಯು ಈ ಮುಖದ ಅಧಿಪತಿಯಾಗಿದ್ದಾನೆ. ‘ಅಭಯ’ ಮತ್ತು ‘ವರಪ್ರದಾ£’Àದ ಮುದ್ರೆಗಳನ್ನು ಹೊಂದಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಿಸಿದವುಗಳಾಗಿವೆ ಹಾಗೂ ಈ ಮುಖಕ್ಕೆ ‘ಜಲ’ವು ಸ್ಥಾನವಾಗಿದೆ.

2.    ಎರಡನೇಯ ಮುಖವು ‘ವಿದ್ರುಮ’ ಎಂದರೆ ರಜೋಗುಣಸೂಚಕವಾದ ಕೆಂಪು ವರ್ಣದಿಂದ ಕೂಡಿದೆ. ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆ ಇದರ ಉದ್ದೇಶವಾಗಿದೆ. ‘ಪಾಶ’ ಮತ್ತು ‘ಅಂಕುಶ’ ಗಳನ್ನು ಧರಿಸಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಪಟ್ಟಿವೆ. ದುಷ್ಟಶಿಕ್ಷಕಿ-ಶಿಷ್ಟರಕ್ಷಕಿಯಾದ ‘ದುರ್ಗೆ’ಯು ಈ ಮುಖದ ಅಧಿದೇವತೆಯಾಗಿದ್ದಾಳೆ. ಶಿಕ್ಷಾಶಾಸ್ತ್ರವನ್ನು ಪ್ರತಿನಿಧಿಸುವ  ಈ ಮುಖದ ಸ್ಥಾನವು ‘ಅಗ್ನಿ’ ಯಾಗಿದೆ.

3.    ಮೂರನೇಯ ಮುಖವು ‘ಹೇಮ’ ಎಂದರೆ ಬಂಗಾರದ ವರ್ಣದಲ್ಲಿದೆ. ‘ಸೂರ್ಯÀ’ ನು ಈ ಮುಖದ ಅಧಿದೇವತೆಯಾಗಿದ್ದಾನೆ. ಕಲ್ಪಶಾಸ್ತ್ರವನ್ನು ಸೂಚಿಸುವ ಈ ಮುಖದ ಅಧೀನದಲ್ಲಿರುವ ಎಡು ಕೈಗಳು ಕಪಾಲ ಮತ್ತು ಗದೆಯನ್ನು ಧರಿಸಿವೆ. ಅವುಗಳಿಂದ ಆಹಾರ ಮತ್ತು ಸುರಕ್ಷತೆಯು ಲಭಿಸುತ್ತವೆÉ.  ಈ ಮುಖದ ಸ್ಥಾನವು ‘ವಾಯು’ ಆಗಿದೆ.

4.    ಗಾಯತ್ರಿಯ ನಾಲ್ಕನೇಯ ಮುಖವು ಆಕಾಶಸೂಚಕವಾದ ‘ನೀಲ’ ವರ್ಣದಲ್ಲಿದೆ.  ನೀಲ ವರ್ಣ ಹಾಗೂ ಆಕಾಶ  ಇವೆರಡೂ ಕೂಡ ಶೂನ್ಯಸ್ವರೂಪಗಳು ಹಾಗೂ ನಿರ್ಗುಣ ಪರಬ್ರಹ್ಮದ ಸೂಚಕಗಳಾಗಿವೆ. ಆಳವಾದ ನೀರಿನ ಸ್ಥಾವರವೂ ಕೂಡ ನೀಲವರ್ಣದಿಂದಲೇ ಕೂಡಿದ್ದು, ಜಲವು ವಿಷ್ಣುತತ್ವಸೂಚಕವಾಗಿದೆ.  ವಿಷ್ಣು ಈ ಮುಖದ ಅಧಿದೇವತೆಯಾಗಿದ್ದಾನೆ ಹಾಗೂ ಶಂಖ-ಚಕ್ರಗಳನ್ನು ಧರಿಸಿದ ಎರಡು ಕೈಗಳು ಈ ಮುಖಕ್ಕೆ ಸಂಬಂಧಿಸಿವೆ. ಈ ಮುಖವು ‘ನಿರುಕ’್ತ ಗ್ರಂಥವನ್ನು ಪ್ರತಿನಿಧಿಸುತ್ತದೆ. ‘ಆಕಾಶ’ವು ಈ ಮುಖದ ಸ್ಥಾನವಾಗಿದೆ.

5.    ಐದನೇಯ ಮುಖವು ‘ಧವಲ’ ಎಂದರೆ ಬಿಳೀ ಬಣ್ಣವನ್ನು ಹೊಂದಿದೆ. ಶ್ವೇತ ವರ್ಣವು ಶುಧ್ಧತೆ, ಸತ್ವಗುಣ ಹಾಗೂ ತ್ಯಾಗದ ಸಂಕೇತವಾಗಿದೆ. ಈ ಮುಖದ ಅಧೀನದಲ್ಲಿರುವ ಎರಡು ಕೈಗಳಲ್ಲಿ ಎರಡು ಕಮಲ ಪುಷ್ಪಗಳು ಶೋಭಿತವಾಗಿವೆ. ಈ ಪುಷ್ಪಗಳು ಬ್ರಹ್ಮ ಮತ್ತು ಭಾವಸಿದ್ಧಿಯನ್ನು ಸೂಚಿಸುತ್ತವೆ.  ಯೋಗಿಗಳ ಗುರುವಾದ,  ತ್ಯಾಗಮೂರ್ತಿಯಾದ ಶಿವನು ಈ ಮುಖದ ಅಧಿದೇವತೆಯಾಗಿದ್ದಾನೆ. ಜ್ಯೋತಿಸ್ವರೂಪಿಯಾದ ಜ್ಯೋತಿಷ ಶಾಸ್ತ್ರವನ್ನು ಈ ಮುಖವು ಪ್ರತಿನಿಧಿಸುತ್ತದೆ.  ‘ಪೃಥ್ವಿ’ ಅಥವಾ ಭೂಮಿಯು ಈ ಮುಖದ ಸ್ಥಾನವಾಗಿದೆ.
ಮುಖ        ವರ್ಣ          ಸ್ಥಾನ        ದೇವತೆ           ಕೈಗಳು
1             ಮುಕ್ತಾ         ಜಲ         ಗಣೇಶ          ಅಭಯ-ವರದ
2             ವಿದ್ರುಮ       ಅಗ್ನಿ         ದುರ್ಗಾ         ಪಾಶ-ಅಂಕುಶ
3             ಹೇಮ         ವಾಯು      ಸೂರ್ಯ        ಕಪಾಲ-ಗದಾ
4             ನೀಲ          ಆಕಾಶ       ವಿಷ್ಣು           ಶಂಖ-ಚಕ್ರ
5             ಧವಲ         ಪೃಥ್ವಿ         ಶಿವ            ಎರಡು ಕಮಲ ಪುಷ್ಪಗಳು

ಪೃಥ್ವಿ, ಆಪ ತೇಜ ಇತ್ಯಾದಿ ಪಂಚಭೂತಗಳಿಗೆ ಅಧಿದೇವತೆಗಳಾದ ಗಣೇಶ, ದುರ್ಗಾ, ಸೂರ್ಯ, ವಿಷ್ಣು ಹಾಗೂ ಶಿವ ಈ ಐದು ದೇವತೆಗಳನ್ನೇ ಒಟ್ಟಿಗೆ ಸೇರಿಸಿ ಸಮಷ್ಟಿಯಾಗಿ ‘ಪಂಚಾಯತನ’ ಎಂದು ಕರೆದು ಪೂಜಿಸುವ ಪದ್ಧತಿ ಬಹುತೇಕ ಎಲ್ಲ ಗೃಹಸ್ಥರ ಮನೆಗಳಲ್ಲಿ ಹಾಗೂ ಮಠಮಾನ್ಯಗಳಲ್ಲಿ ಪ್ರಚಲಿತವಿದೆ. ಈ ಐದು ದೇವತೆಗಳ ಸಮಷ್ಟಿರೂಪವೇ ಪರಬ್ರಹ್ಮತತ್ವ (ಗಾಯತ್ರಿ) ಆಗಿದೆ.  ಗಾಯತ್ರೀ ದೇವಿಯ ಶಿರದಲ್ಲಿರುವ ಚಂದ್ರಮೌಳಿಯು ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ತಾವರೆ ಹೂವಿನ ಮೇಲೆ ಗಾಯತ್ರಿ ಕುಳಿತಿರುತ್ತಾಳೆ. ಈ ತಾವರೆಯು ಕೆಸರಿನಲ್ಲಿ ಹುಟ್ಟಿ ನೀರಿನಲ್ಲೇ ಬೆಳೆದು ನಿಂತಿದ್ದರೂ ಕೆಸರು ಅಥವಾ ನೀರನ್ನು ತನಗೆ ಮೆತ್ತಿಸಿಕೊಳ್ಳುವುದಿಲ್ಲ.  ಹೀಗೆ ಸಂಸಾರಸಾಗರದಲ್ಲಿ ಜನಿಸಿದ ಮಾನವನು ಸಂಸಾರದ ಭಾಗವಾದ ರಾಗ-ದ್ವೇಷಾದಿಗಲನ್ನು ಅಚಿಟಿಸಿಕೊಳ್ಳದೇ ಅಲಿಪ್ತನಾಗಿಯೇ ಉಳಿದು ಬ್ರಹ್ಮತತ್ವವನ್ನು ಹೊಂದಲು ಪ್ರಯತ್ನಿಸಬೇಕೆಂಬುದೇ ಇದರ ಗೂಢಾರ್ಥವಾಗಿದೆ.

ಇನ್ನು ಕೆಲ ಉಪಾಸಕರು ಗಾಯತ್ರಿಯ ಧ್ಯಾನಶ್ಲೋಕದಲ್ಲಿ ‘ಮುಖೈಸ್ತ್ರೀಕ್ಷಣೈಃ’ ಎನ್ನುವುದರ ಬದಲಾಗಿ ‘ಮುಖೈಸ್ತ್ರ್ಯಕ್ಷತೈಃ’ ಎಂದು ಹೇಳುತ್ತಾರೆ. ಅವರ ಉಪಾಸನಾ ವಿಧಾನದಲ್ಲಿ ಗಾಯತ್ರೀ ದೇವಿಗೆ ಮೂರೇ ಮುಖಗಳು ಇರುವುದು. ಮುಕ್ತಾ ಇತ್ಯಾದಿ ಐದು ವರ್ಣಗಳು ದೇವಿಯ ದೇಹದ ವರ್ಣಗಳು ಎಂದು ಆ ಪಂಥದ ಉಪಾಸಕರ ಮತ. “ಮುಖೈಃ+ತ್ರೀ+ಅಕ್ಷತೈಃ = ಮುಖೈಸ್ತ್ರ್ಯಕ್ಷತೈಃ’’  ‘ಅಕ್ಷತ’ ಎಂದರೆ ಪರಿಪೂರ್ಣ, ಅಭೇದ ಮುಂತಾದ ಅರ್ಥಗಳಿವೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಅಭೇದವಾದ ಅಂದರೆ ತ್ರಿಮೂರ್ತಿಗಳ ಮೂರು ಮುಖಗಳೇ ಗಾಯತ್ರಿಯ ಮೂರು ಮುಖಗಳಾಗಿವೆ ಎಂಬುದು ಆ ಸಂಪ್ರದಾಯದ ಮತ.
‘ವರ್ಣ’ ಎಂಬ ಶಬ್ದಕ್ಕೆ ಮೂಲದಲ್ಲಿ ‘ಸ್ಥಿತಿ’ ಎಂಬ ಅರ್ಥವಿದೆ. ಹಿಗಾಗಿ ಮುಕ್ತಾ ಇತ್ಯಾದಿ ಪಂಚವರ್ಣಗಳು ಪಂಚಭೂತಗಳ ಸ್ಥಿತಿಯನ್ನು ಗಾಯತ್ರಿಯ ದೇಹದಲ್ಲಿ ಸೂಚಿಸುತ್ತವೆ. ಶೈವ ಪಂಥದವರು ಗಾಯತ್ರಿಯನ್ನು ಕೂಡ ಶಿವನಂತೆಯೇ ಪಂಚಮುಖಿಯಾಗಿ ಹಾಗೂ ತ್ರಿನೇತ್ರಯುಕ್ತಳಾಗಿ ವರ್ಣಿಸಿದ್ದಾರೆ ಎಂಬು ತ್ರಿಮುಖೀ ಗಾಯತ್ರೀ ಉಪಾಸಕರು ನೀಡುವ ಸ್ಪಷ್ಟನೆ.
ಹೀಗೆ ಗಾಯತ್ರಿಯ ಸ್ವರೂಪದ ಬಗ್ಗೆ ತಿಳಿಯುತ್ತ ಹೋದಾಗ  ಇನ್ನೊಂದು ಆಯಾಮವೂ ಕೂಡ ಸಿಗುತ್ತದೆ.
ಮುಕ್ತಾ- ಎಂದರೆ ಭಸ್ಮದ ವರ್ಣ, ಅಗ್ನಿಯಲ್ಲಿ ಎಲ್ಲ ರೀತಿಯ ಕಲ್ಮಶಗಳೂ ಸುಟ್ಟು ಶುಧ್ಧವಾಗಿ  ‘ಮುಕ್ತ’ವಾದ ಮೇಲೆ ಭಸ್ಮವು ಸಿದ್ಧವಾಗುತ್ತದೆ. ಮಣ್ಣಿನ ಅಥವಾ ಪೃಥ್ವಿಯ ರೂಪವಾದ ಭಸ್ಮದ ‘ಗುಣ’ವು ‘ಗಂಧ’ವಾಗಿದೆ.
ವಿದ್ರುಮ- ದ್ರುಮದಿಂದ ಎಂದರೆ ವೃಕ್ಷದಿಂದ ದ್ಯುತಿಸಂಸ್ಲೇಷಣೆ(ಠಿhoಣo sಥಿಟಿಣhesis) ಕ್ರಿಯಯಿಂದ ಉಂಟಾಗುವ ಆಮ್ಲಜನಕವು ಹಾಗೂ ತನ್ಮೂಲಕವಾಗು ಹೊರಹೊಮ್ಮುವ ನೀರಿನ ಅಂಶವು ಇಲ್ಲಿನ ವಿದ್ರುಮ ಎಂಬ ಶಬ್ದಕ್ಕೆ ಅರ್ಥ. ಪಂಚಭೂತಗಳಲ್ಲಿ ಒಂದಾದ ‘ಜಲ’ದ ಗುಣವು ‘ರಸ’
ಹೇಮ-  ಅಗ್ನಿಯು ಹೇಮವರ್ಣದಿಂದ ಕೂಡಿದೆ ಹಾಗೂ ‘ರೂಪ’ ಅದರ ಗುಣ.
ನೀಲ- ವಾಯುವಿನ ವರ್ಣವು ನೀಲವಾಗಿದ್ದು ‘ಸ್ಪರ್ಶ’ ಅದರ ಗುಣವಾಗಿದೆ.
ಧವಲ- ಆಕಾಶವು ಶ್ವೇತವರ್ಣವನ್ನೂ ಹೊಂದಿದ್ದು ‘ಶಬ್ದ’ ಅದರ ಗುಣವಾಗಿದೆ.
ಹೀಗೆ ಪೃಥ್ವಿ, ಆಪ, ತೇಜ, ವಾಯು, ಆಕಾಶವೆಂಬ ಪಂಚಭೂತಗಳು ಹಾಗು ಅವುಗಳ ಗುಣಗಳಾದ ಶಬ್ದ, ಸ್ಪರ್ಶ, ರೂಪ, ಸ, ಗಂಧ ಗಳೇ ಸಗುಣರೂಪಿಯಾದ ಗಾಯತ್ರೀದೇವಿಯ ಸ್ವರೂಪವಾಗಿವೆ.  ವಿದ್ವಾಂಸರ ಮತಭೇದಗಳೇನೇ ಇದ್ದರೂ ವಾಸ್ತವದಲ್ಲಿ ಸಕಲ ಚರಾಚರ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪ್ತವಾಗಿದ್ದು ಜೀವಿಗಳ ಹೃದಯದಲ್ಲಿ ‘ಆತ್ಮಸಾಕ್ಷೀ’ ರೂಪದಲ್ಲಿರು ಚೈತನ್ಯ ತತ್ವವೇ ಗಾಯತ್ರಿಯ ನಿಜಸ್ವರೂಪವಾಗಿದೆ. ಆದ ಕಾರಣದಿಂದಲೇ ಗಾಯತ್ರೀ ಮಂತ್ರೋಪಾಸನೆ ವೇದಕಾಲದಿಂದ ಇಂದಿನವರೆಗೂ ಪ್ರತಿನಿತ್ಯದ ವೈದಿಕ ಉಪಾಸನೆಯ ಕೇಂದ್ರಬಿಂದುವಾಗಿದೆ.