Friday, September 6, 2013

ತೀರ್ಥ ಯಾತ್ರೆ (ಪೂಜೆ ಎಂದರೇನು )

ತೀರ್ಥ ಯಾತ್ರೆ (''ಪೂಜೆ ಎಂದರೇನು'' ಪುಸ್ತಕದ ಒಂದಿಷ್ಟು ಸಾಲುಗಳು )

ಜೀವನ ಪೂರ್ತಿ ನ್ಯಾಯ ನೀತಿ ಧರ್ಮ.. ದೇವರು ಎಲ್ಲ ಬಿಟ್ಟು .. ಶಿಕ್ಷಣ, ಕೆಲಸ, ಮದುವೆ, ಸಂಸಾರ, ಮಕ್ಕಳು ಆಸ್ತಿ ... ಎಲ್ಲ ಮುಗಿದ ಮೇಲೆ ಪುಣ್ಯ ಸಂಪಾದನೆ ಮಾಡ್ತೀವಿ, ತೀರ್ಥ ಕ್ಷೇತ್ರ ನೋಡ್ತೀವಿ ... ದೇವರು ಎಲ್ಲ ಪಾಪ ನಾಶ ಮಾಡ್ತಾನೆ ಅನ್ನೋ ಭಾವನೆಯೇ ಮೂರ್ಖತನದಿಂದ ಕೂಡಿದ್ದು. ಆ ಮೂರ್ಖರನ್ನು ಆ ವ್ಯಾಪಾರಿಗಳು ಮತ್ತು ಟ್ರಾವೆಲ್ ಏಜೆಂಟರು ಸುಲಿದು ಹಾಕುವುದರಲ್ಲಿ ಯಾವುದೇ ಅಸಹಜತೆ ಇಲ್ಲ

ತೀರ್ಥಕ್ಷೇತ್ರಗಳಿಗೆ ಹೋದರೆ ಪುಣ್ಯ ಅಂತ ಪುರಾಣಗಳಲ್ಲಿ ಉಲ್ಲೇಖ ಇದೆ ನಿಜ. ಆದರೆ ತೀರ್ಥಕ್ಷೇತ್ರಗಳಿಗೆ ಹೋಗುವ ವಿಧಾನ ಬೇರೆ ಇದೆ. ಒಂದು ಸಮಾನ ಮನಸ್ಕ ಗುಂಪು ಕಾಲ್ನಡಿಗೆಯಿಂದ ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಮಾಡುತ್ತಾ .. ಮಧ್ಯೆ ಮಧ್ಯೆ ಸಿಗುವ ಊರುಗಳಲ್ಲಿ ಭಿಕ್ಷೆ ಸ್ವೀಕರಿಸಿ ಅದರಿಂದ ಹೊಟ್ಟೆ ತುಂಬಿಸಿಕೊಂಡು ತಿಂಗಳುಗಟ್ಟಲೆ ಪ್ರಯಾಣ ಮಾಡಿ ಅಲ್ಲಿ ಆ ದೇವರ ಕ್ಷೇತ್ರವನ್ನು ತಲುಪುವ ಹೊತ್ತಿಗೆ ಸಂಪೂರ್ಣವಾಗಿ ಬೇರೆಯದೇ ರೀತಿಯ ಮನುಷ್ಯರಾಗಿ ಪರಿವರ್ತಿತಗೊಂಡಿರುತ್ತಾರೆ. ಸಮಯ, ಆರೋಗ್ಯ ಸ್ವಪ್ರತಿಷ್ಥೆ, ಅಹಂಕಾರ ಎಲ್ಲವನ್ನು ಕಳೆದುಕೊಂಡು ಜ್ಞಾನ ವನ್ನು ಮಾತ್ರ ಪಡೆದು ದೇವರ ಮುಂದೆ ಶರಣಾಗಲು ಸಿದ್ಧವಾಗಿರುತ್ತಾರೆ . ಪ್ರಕೃತಿಯ ಆಗಾಧತೆ, ಲೋಕದ ವಿಲಕ್ಷಣತೆ ಮಾನವನ ಅಸಹಾಯಕೆತೆ ಇವೆಲ್ಲವುಗಳನ್ನು ಅನುಭವದಿಂದ ಗಳಿಸಿರುತ್ತಾರೆ. ಆ ಮಟ್ಟಕ್ಕೆ ಬೆಳೆಯಲು ಆ ತೀರ್ಥಯಾತ್ರೆಯೆ ಕಾರಣ . ಹಾಗಾಗಿ ತೀರ್ಥ ಯಾತ್ರೆಗೆ ಅಷ್ಟು ಮಹತ್ವ ಇತ್ತು. ಆ ದೇವಸ್ಥಾನದಲ್ಲಿ ಏನು ವಿಶೇಷ ಇರುವುದಿಲ್ಲ. ಯಾತ್ರೆಯ ಅನುಭವ ... ದಾರಿಯಲ್ಲಿ ಕಥಾಶ್ರವಣ, ನಾಮಸ್ಮರಣೆ ಮತ್ತು ಸ್ವಾಭಾವಿಕವಾಗಿ ಆಗುವ ಜೇವನದ realizationನಿಜವಾದ ಫಲ.

ನಾಳೆಯ ಊಟದ ಮತ್ತು ವಾಸದ ವ್ಯಸ್ಥೆಯ ಬಗ್ಗೆ ಚಿಂತೆಯನ್ನು ಬಿಟ್ಟು ಮುಂದುವರೆದರೆ ಅದು ತೀರ್ಥ ಯಾತ್ರೆ. ನನಗೆ ಗೊತ್ತಿರುವ ಒಬ್ಬರು ಅವಧೂತರ . ಕೇವಲ ಇಬ್ಬರು ಸ್ನೇಹಿತರನ್ನು ಜೊತೆಗೆ ಇಟ್ಟುಕೊಂಡು ಒಂದು ಪೈಸೆ ದುಡ್ಡು ಕೈಯಲ್ಲ್ಲಿ ಇಲ್ಲದೆ ಎರಡು ಜೊತೆ ಬಟ್ಟೆ ಇಟ್ಟುಕೊಂಡು ಗೋದಾವರಿ ನದಿಯನ್ನು ಪೂರ್ತಿಯಾಗಿ ಪ್ರದಕ್ಷಿಣೆ ಮಾಡಿ ಬಂದಿದ್ದಾರೆ. ಕಾಲ್ನಡಿ ಗೆ.. ಬಿಕ್ಷೆ ಮತ್ತು ನಾಮಸ್ಮರಣೆ... ಈ ಮೂರರ ಸಹಾಯದಿಂದ ಯಾತ್ರೆ ಮುಗಿಸಿದ್ದಾರೆ. ಅದು ನಿಜವಾದ ತೀರ್ಥಯಾತ್ರೆ

No comments:

Post a Comment