Thursday, June 21, 2012

ನಾವು ಎತ್ತ ಕಡೆಗೆ ಹೊರಟಿದ್ದೇವೆ...?

ವಿದ್ವಾಂಸರನ್ನು ಪಕ್ಕಕ್ಕಿಟ್ಟು ದೊಡ್ಡ ಸಂಖ್ಯೆಯಲ್ಲಿರುವ  ಸಾಮಾನ್ಯರ  ದೃಷ್ಟಿಯಿಂದ ನೋಡುವುದಾದರೆ"ಧರ್ಮಎಂಬಪದವನ್ನು ಮತ್ತು  ಅದರ ಸ್ವರೂಪವನ್ನು                     ನಾವುಗಳು ತಪ್ಪಾಗಿಯೇತಿಳಿದಿದ್ದೇವೆ ಎಂದುಹೇಳಬೇಕಾಗುತ್ತದೆ ಧರ್ಮದ ಬಗ್ಗೆ ನಮ್ಮಲ್ಲಿ ಇರುವಷ್ಟು ತೊಡಕು ತೊಡಕಾದ ಮಾಹಿತಿ ಬೇರೆ ದೇಶಗಳ ಜನರಲ್ಲಿ ಕಂಡು ಬರುವುದಿಲ್ಲ. (ಆಧ್ಯಾತ್ಮ, ಸಂಸ್ಕೃತಿ, ಯೋಗ, ಪೂಜೆ, ಯಜ್ಞ, ಹೋಮ, ಪಾಪ ಪುಣ್ಯ, ಮುಂತಾದ ಶಬ್ದಗಳು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ) ಇನ್ನೂ ಸ್ಪಷ್ಟವಾಗಿ ಅರ್ಥವಾಗಬೇಕಾದರೆ ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ. ನಿಮ್ಮ ಸಂಪರ್ಕದಲ್ಲಿನ ಅತ್ಯಂತ ಸುಶಿಕ್ಷಿತರಂತೆ ಕಾಣುವ ಹಾಗೂ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿ ಆ ಮೂಲಕ ತಮ್ಮ ವಲಯ ದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ವ್ಯಕ್ತಿಯೊಬ್ಬರನ್ನು ಚರ್ಚೆಗೆಳೆದು ಹಿಂದೂ ಧರ್ಮದ ಇಂದಿನ ಪರಿಸ್ಥಿತಿ ಏನು..? ನಮ್ಮ ಜೀವನದಲ್ಲಿ ಅದರ ಪಾತ್ರವೇನು ..? ಎಂದು ಒಮ್ಮೆಲೇ ಪ್ರಶ್ನಿಸಿ ನೋಡಿ. ನಿಮ್ಮ ಪ್ರಶ್ನೆಯಿಂದ ಆ ವ್ಯಕ್ತಿ ಕಂಗಾಲಾಗಿ ಏನು ಹೇಳಬೇಕೆಂದು ತಿಳಿಯದೆ ತಡಬಡಿಸುತ್ತಾನೆ. 
ಅದೇರೀತಿ ತನ್ನನ್ನು ತಾನುಧಾರ್ಮಿಕನೆಂದು ತಿಳಿಯದ ಒಬ್ಬ ಸಾಮಾನ್ಯ ದಾರಿಹೊಕನಲ್ಲಿ ನೀವು ಇದೇ ಪ್ರಶ್ನೆಯನ್ನು ಕೇಳಿದಾಗಸಿಗುವ ಉತ್ತರ ಮೊದಲಿನ ಸ್ವಯಂಘೋಷಿತ ಧಾರ್ಮಿಕ ವ್ಯಕ್ತಿಯ ಉತ್ತರಕ್ಕಿಂತ ಹೆಚ್ಚೇನೂಬೇರೆಯಾಗಿರುವುದಿಲ್ಲ. ಕಾಲಕ್ಕೆ ತಕ್ಕಂತೆ ಧರ್ಮವು ತನ್ನ ಆಯಾಮ್ಗಳನು ಬದಲಿಸಿಕೊಳ್ಳುತ್ತದೆ.ಆದರೆ  ಬದಲಾವಣೆಯನ್ನು ನಾವು ಸ್ವೀಕರಿಸದೆ ಇರುವುದು ಮತ್ತು ಧರ್ಮದ ಬಗ್ಗೆ ತಪ್ಪುತಿಳುವಳಿಕೆಯ ಪರಂಪರೆ ನಡೆದು ಬಂದಿರುವುದೇ ಇಂದಿನ ಈ ಸ್ಥಿತಿಗೆ ಕಾರಣ ಅಂತ ಅನ್ನಿಸುತ್ತೆ.ಅನೇಕ ರೀತಿಯ ಧಾರ್ಮಿಕತೆಯ ವೇಷಧಾರಿಗಳು ಜನರ ತಪ್ಪು ತಿಳುವಳಿಕೆಯ ಮೇಲೆ ತಮ್ಮಬೇಳೆ ಬೇಯಿಸಿಕೊಂಡು ತಪ್ಪು ತಿಳುವಳಿಕೆಯ ಪರಂಪರೆಯನ್ನು ಪ್ರಯತ್ನಪೂರ್ವಕವಾಗಿಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಹಾಗೂ ಪರಿಸ್ಥಿತಿ ಇನ್ನೂ ಜಟಿಲವಾಗುತ್ತಾ ಹೋಗುತ್ತಿದೆ.ಕೆಲವರು ಧಾರ್ಮಿಕ ಶಿಕ್ಷಣ ನೀಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತೆ ಅಂತ ಹೇಳ್ತಾರೆ.ಆದರೆ ಆರ್ಥಿಕ ಪ್ರಯೋಜನವಿಲ್ಲದ ಶಿಕ್ಷಣವನ್ನು ಪಡೆಯುವ ಸ್ಥಿತಿಯಲ್ಲಿ ಇಂದು ಯಾರೂ ಇಲ್ಲ.ಕೇವಲ ಜೀವನದಲ್ಲಿ ಸಮಸ್ಯೆಗಳು ಬಂದಾಗ ಪರಿಹಾರಕ್ಕಾಗಿ ಮಾತ್ರ ನಾವ ದೇವರ ಮೊರೆಹೋಗುತ್ತಿದ್ದೇವೆ ಮತ್ತು ಅದನ್ನೇ ಧಾರ್ಮಿಕತೆ ಅಂತ ತಿಳಿದುಕೊಂಡಿದ್ದೇವೆ. ದೇವರ ಇರುವಿಕೆಯನ್ನು ನಂಬುವುದು ಮತ್ತು ಕಷ್ಟಕಾಲದಲ್ಲಿ ಅವುಗಳನ್ನು ಪರಿಹರಿಸೆಂದು ಅವನನ್ನು ಪ್ರಾರ್ಥಿಸುವುದು ಕೇವಲ ಆಸ್ತಿಕತೆ. (ದೇವರ ಅಸ್ತಿತ್ವವನ್ನು ಒಪ್ಪುವಿಕೆ ಅಷ್ಟೇ) ಅದು ಧಾರ್ಮಿಕತೆಯೂ ಅಲ್ಲ. ಆಧ್ಯಾತ್ಮಿಕತೆಯೂ ಅಲ್ಲ.ವಾಸ್ತವವಾಗಿ ಇಲ್ಲಿ ನಾವುಗಳು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯವಿಷಯವೇನೆಂದರೆ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಎರಡು ವಿಭಿನ್ನ ವಿಷಯಗಳು. ಅಧ್ಯಾತ್ಮ ಅನ್ನೋದು ಶರೀರದೊಳಗಿನ ಆತ್ಮ, ಅದರ ಬಂಧನ, ವಿಮೋಚನೆಯ ವಿಧಾನ ಅಂದರೆ ಮುಕ್ತಿಯ ಮಾರ್ಗ, ಮಾಡಬೇಕಾದ ಸಾಧನೆ ಮುಂತಾದ ವಿಷಯಗಳನ್ನು ಒಳಗೊಂಡಿದೆ. ಇಲ್ಲಿ ಧರ್ಮದ ಪ್ರಸ್ತಾಪವೇ ಬರುವುದಿಲ್ಲ. ಭಕ್ತಿ ಮಾರ್ಗ, ಯೋಗ ಮಾರ್ಗ ಮುಂತಾದ ಅನೇಕ ದಾರಿಗಳು ಆತ್ಮ-ಪರಮಾತ್ಮ ಮಿಲನದ ದಿಕ್ಕಿನ ಕಡೆಗೆ ಹೋಗುತ್ತವೆ. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ತ್ಯಾಗವೇ ಮುಕ್ತಿ ಸಾಧನೆಯ ಏಕೈಕ ದಾರಿ (ತ್ಯಾಗೆನೈಕೆ ಅಮೃತತ್ವಮಾನಶು:) 
         ಇನ್ನು ಧರ್ಮದ ವಿಷಯಕ್ಕೆ ಬರುವುದಾದರೆ ನೈತಿಕತೆಯ ಜೀವನ ವಿಧಾನವೇ ಧರ್ಮ ಎಂದು ಹೇಳಬೇಕಾಗುತ್ತದೆ. ಆದರೆ ಧರ್ಮವನ್ನು ನಾವು ಒಂದು religion ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಇಲ್ಲಿ ಹಿಂದೂಮುಸ್ಲಿಂಕ್ರೈಸ್ತ ಮುಂತಾದವುಗಳು ಕೇವಲ ಸಿದ್ಧಾಂತಅಥವಾ ಮತದ ಹೆಸರುಗಳುಧರ್ಮ ಇವೆಲ್ಲವನ್ನೂ ಮೀರಿದ್ದು.

No comments:

Post a Comment